Thursday, November 15, 2012

ಪರಮಾತ್ಮ

My poem was published in Suddi Bidugade on 12th Nov 2012
 
ಪರಮಾತ್ಮ

ಹರಿವ ನೀರಿಗೆ ನಿರಂತರ ಸೆಳೆತವಾಗಿ
ಬಾಂದಳದಲಿ ಬೆಳಗುವ ರವಿಗೆ ಶಕ್ತಿಯಾಗಿ
ಸದಾ ಪರಿಭ್ರಮಣಕೆ ಭೂಮಿಯ ಕಕ್ಷೆಯಾಗಿ
ಅರಳಿದ ಹೂವಿನ ಎಸಳಿನ ಕೆಂಪು ನೀನಾಗಿ

ಕುಲಕೋಟಿಯಭ್ಯುದಯದ ಪ್ರೀತಿಯಾಗಿ
ಬೀಸುವ ಗಾಳಿಯಲಿ ಬೆರೆತ ಉಸಿರಾಗಿ
ಹಾಡುವ ಹಕ್ಕಿಗೊರಳಿನ ನಾದವಾಗಿ
ಕಂಪಾಗಿ, ತಂಪಾಗಿ, ಸೊಂಪಾಗಿ, ಇಂಪಾಗಿ

ಕೋಟಿಸಂಖ್ಯೆಯ ದಾನವರ ನಡುವೆ ಓರ್ವ ಸಂತನಾಗಿ
ಶೂನ್ಯದೊಳಗಿನನಂತ ಬ್ರಹ್ಮಾಂಡವಾಗಿ
ಅನಂತ ದಿಗಂತದಾಚೆಗಿನ ಶೂನ್ಯ ನೀನಾಗಿ
ನಿನ್ನೆ ನಾಳೆಗಳ ನಡುವಿನ ಇಂದು ನೀನಾಗಿ

ನಿರಂತರ ನಿರೀಕ್ಷೆಗಳ ಅಂತ್ಯ ನೀನಾಗಿ
ಪಿತನಾಗಿ ಸುತನಾಗಿ ಸತಿಯಾಗಿ ಪತಿಯಾಗಿ
ಮಾತೆ ಮಮತೆಯ ನಿರ್ಮಲ ಜಲಧಿಯಾಗಿ
ಅಂತರಾತ್ಮದೊಳಗಿನ ಏಕಾಂತ ಸತ್ಯವಾಗಿ

ಜ್ಞಾನ ವಿಜ್ಞಾನಗಳ ಸಂಯುಕ್ತವಾಗಿ
ಸತ್ಯಪಥವಾಗಿ ಶಿಷ್ಟರಕ್ಷಕನಾಗಿ
ಬಿಂದುವಲಿ, ಸಿಂಧುವಲಿ, ಜೀವದಲಿ, ಆತ್ಮದಲಿ
ಬೆರೆತ ಅಮೂರ್ತ ಮೂರ್ತಿಯೇ. . .
       ನಿನಗೆ ಕೋಟಿ ನಮಸ್ಕಾರ...


http://news.suddimahithi.com/puttur/news.asp?s_dateentry=12%2F11%2F2012&econtentPage=4

Thursday, November 8, 2012

ಹಣ ಸುಡುವ ಹಬ್ಬ...

ಸುಡಬೇಡ ಹಣವನೀ, ಕಡಿವತೆರ ಕೊಡಲಿಯಲಿ
ಕುಳಿತ ಕೊಂಬೆಯ ಮೂಢ ಅಡವಿಯೊಳಗೆ...
ಸತ್ಕಾರ್ಯಗಳ ನಡೆಸಿ , ದಾನಾದಿಗಳನಿತ್ತು
ಸಂತಸವ ಕಾಣುತಿರು ದೀನರೊಳಗೆ...  ---- ಲ.ನಾ.ಭಟ್ಟ

Tuesday, October 23, 2012

ಉಸಿರು...

ಕಾವ್ಯವಾಗದೇ ಕಣವು ಕವಿಯು ಜೀವದ ಲೇಪವಿಡಲು
ನೃತ್ಯವಾಗುವುದು ಹೆಜ್ಜೆ ತಾಳ ಮೇಳಗಳ ಪ್ರೀತಿಯಲಿ ವರಿಸಿರಲು
ಕಲೆಯಾಗದೇ ಬರಿಯ ಕಲೆ-ಕಲೆ-ಯೆಂಬ ಬಣ್ಣಗಳು
ಕಥೆಯಾಗದೆ ಸದಾ ಸಾಧನೆಯ ಪರಿಮಳವ ಸೆಳೆವುಸಿರು

Thursday, September 20, 2012

ಮಣ್ಣಬೊಂಬೆ


ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ

ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ


ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು

ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು



ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು 
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...




ದಾನವ...

ರೇಶಿಮೆಯ ಹುಳ ಬಹಳ
ನಾಜೂಕಿನಲಿ ಹೆಣೆದ
ಮನೆಯ ಮಾನವ ಕದ್ದು
ಸೀರೆ ನೇಯ್ದ

ಜೇನುಹುಳ ಸುಳಿಸುಳಿದು
ಮೈಲು ಗಟ್ಟಲೆಯಲೆದು
ಜತನದಲಿ ಕಾಯ್ದಿಟ್ಟ
ಮಧುವ ಕುಡಿದ

ಬಿಸಿಲು ಮಳೆ ಚಳಿಗಾಳಿಗಂಜದೇ
ಎದೆಯೆತ್ತಿ
ಬೃಹದ್ಗಾತ್ರದಲಿ ಬೆಳೆದ
ವೃಕ್ಷಗಳ ಸವರಿದ

ಘೋರವ್ಯಾಘ್ರವೆ ಬರಲಿ
ಕ್ರೂರ ಕರಡಿಯೆ ಇರಲಿ
ಗುರಿನೋಡಿ ಬಡಿದು
ಚಿರನಿದ್ರೆಯಲಿ ನೆಲಕೊರಗಿಸಿದ

ತನ್ನಕಾಲನೆ ಕೊಡಲಿಯಲಿ ಕಡಿವ
ಕಡುಮೂರ್ಖ ತಾನಾಗಿ
ಪ್ರಕೃತಿ ಸಂತುಲನವ
ಹಾಳ್ಗೆಡಹಿದ

ಸುತ್ತ ಧಗಧಗಿಸುವ ಬೆಂಕಿಯಲಿ, ತಂಪೆರೆವ
ಯಂತ್ರಗಳ ತಂತ್ರ  ನಿಲುವುದುಂಟೇ
ಹೊಳೆವ ನಾಣ್ಯವೆ ಇರಲಿ, ಗರಿಗರಿಯ ನೋಟಿರಲಿ,
ಅಸುವ ನೀಗಲು  ಹಸಿವೆ ತಿನಲಪ್ಪುದೇ ?





Monday, July 9, 2012

BMTC Route search , A helpful website

If you are a new comer to Bengaluru(Formally Bangalore) and wondering how to find the route number of the BMTC bus to reach your destination.
OR
If you are a Bengalru resident and want to find the easiest route to your destination.
OR
If you want to travel in BMTC leaving your two/four wheeler behind to avoid the stressful drive.
OR
If you are curious to know about BMTC bus routes.
OR else

For any other reason, you have reached here....


http://narasimhadatta.info/bmtc_query.html is the site that would help you.

All the stops and platform information is also available here.


Good work from the developer, I appreciate his efforts.

We need more such sites which would  help the visitors and people who are looking for such information.


Please note that the site admin has posted a banner at the end of the page which states that the site is not 100% accurate, Still I say it worth to have something than having nothing....

Google maps only provide the routes of Vayu Vajra buses which might not be available on all routes, I believe we can use this site with combination of Google Maps(https://maps.google.co.in/) and have a better result.

ನಿಮ್ಮ ಅಭಿಪ್ರಾಯ