Wednesday, October 2, 2013
Rahul's Doll...
Labels:
bjp,
congress,
gandhi,
joke,
mamo,
manmohan,
namo,
rahul gandhi,
sonia,
sonia gandhi
Friday, May 31, 2013
ನಮ್ಮ ಕಿಟ್ಟಿ...
ನಮ್ಮ ಕಂಪೆನಿಯಲ್ಲಿ 2012 ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಐಪಿ ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು. ಆಟಗಾರರ ಕೌಶಲದ ಅಳತೆಯ ಮೂಲಕ ಎ,ಬಿ ಮತ್ತು ಸಿ ವಿಭಾಗಗಳನ್ನು ರಚಿಸಿ, ವಿವಿಧ ತಂಡಗಳ ಮಾಲಕರನ್ನು ನಿರ್ಧರಿಸಿ ಅವರು ಆಟಗಾರರನ್ನು ಹರಾಜಿನಲ್ಲಿ ಕೊಳ್ಳುವ ಮೂಲಕ ತಂಡಗಳನ್ನು ರಚಿಸಿದ್ದರು.
ನಮ್ಮ ತಂಡ ಟೈಟನ್ಸ್, ಪಂದ್ಯಾವಳಿಯ ಪ್ರಾರಂಭಕ್ಕೆ ಮೊದಲು ಒಂದು ತಿಂಗಳಿರುವಂತೆಯೇ ನಮ್ಮ ಅಭ್ಯಾಸ ಪ್ರಾರಂಭವಾಗಿತ್ತು , ನನ್ನ ಕಛೇರಿಯ ಹಿಂಬದಿಯಲ್ಲಿ ಯಾವುದೋ ರಿಯಲ್ ಎಸ್ಟೇಟ್ ಏಜೆನ್ಸಿ ಖರೀದಿಸಿ, ತಡೆಗೋಡೆ ಕಟ್ಟಿ ಇರಿಸಿದ್ದ ಎಕರೆಗಟ್ಟಲೆ ಖಾಲಿಜಾಗದಲ್ಲೇ ನಮ್ಮ ಅಭ್ಯಾಸ. ದಿನಂಪ್ರತಿ ಬೆಳಗ್ಗೆ ೭ರಿಂದ ಒಂಭತ್ತರವರೆಗೆ ನಮ್ಮ ಕಫ್ತಾನ ಪ್ರದೀಪ್ ನೇತೃತ್ವದಲ್ಲಿ ಅವಿರತ ಶ್ರಮವಹಿಸಿ ನಮ್ಮನ್ನು ನಾವು ಸಿದ್ಧಗೊಳಿಸಿದ್ದೆವು. ನಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನಾವು ಮೂರರಲ್ಲಿ ಒಂದೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೆವು, ಪರವಾಗಿಲ್ಲ ಬಿಡಿ, ಈಗ ಕಿಟ್ಟಿಗೂ ಕ್ರಿಕೆಟ್ ಅಭ್ಯಾಸಕ್ಕೂ ಏನು ಸಂಬಂಧವಪ್ಪಾ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಹೊಕ್ಕಿರಬಹುದು, ಹೇಳುತ್ತೇನೆ ಕೇಳಿ.
ಒಂದು ದಿನ ಅಭ್ಯಾಸ ಮುಗಿಸಿ ನಾನು ಮನೆಗೆ ಹಿಂದಿರುಗುತ್ತಿದ್ದಾಗ, ಪುಟ್ಟ ಕಿಟ್ಟಿ ನನ್ನ ಕಣ್ಣಿಗೆ ಕಾಣಿಸಿದ್ದ, ನಮ್ಮ ಕಂಪೆನಿಯಿಂದ ಬಂದು ಶಾಂತಿಪುರದ ರಸ್ತೆಗೆ ತಿರುಗುವ ಮೂಲೆಯ ಸೈಟ್ ನಲ್ಲಿ ಗುಜರಿ ಅಂಗಡಿಯೊಂದಿದೆ, ಆ ಗುಜರಿ ಅಂಗಡಿಯ ಮುಂದೆ ಒಂದು ನಾಯಿಯನ್ನು ಸದಾ ಕಟ್ಟಿ ಹಾಕಲಾಗಿರುತ್ತದೆ, ರಸ್ತೆಯಲ್ಲಿ ಯಾರು ಏನೇ ಮಾಡಿದರೂ ಆ ನಾಯಿಗೆ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತದೆ, ತನ್ನ ಜಾತಿಬಾಂಧವರನ್ನು ಕಂಡರೆ ಮಾತ್ರ ಅದಕ್ಕೆ ತನ್ನ ಜಾತಿಯ ನೆನಪಾಗಿ ತುಸು ಬೊಗಳಿ ಸುಮ್ಮನಾಗುತ್ತದೆ, ಯಾವತ್ತಿನಂತೆ ಇಂದೂ ನಾಯಿಯ ಇರುವಿಕೆಯನ್ನು ಖಚಿತಪಡಿಸಿ ನನ್ನ ಬೈಕ್ ನ್ನು ಎಡಕ್ಕೆ ತಿರುಗಿಸಿ ಸ್ವಲ್ಪ ಮುಂದೆ ಬರುವಷ್ಟರಲ್ಲಿ ಬೆಕ್ಕಿನ ಮರಿಯ ಕೂಗು ನನ್ನ ಕಿವಿಗಳನ್ನು ಅಪ್ಪಳಿಸಿದ್ದೇ ನನ್ನ ಅಂತರಾತ್ಮ ಜಾಗೃತವಾಗಿತ್ತು. ಕಣ್ಣುಗಳು ಸುತ್ತ ಮುತ್ತ ಹುಡುಕತೊಡಗಿದವು. ಬೈಕ್ ನಿಲ್ಲಿಸಿ ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂದು ಗಮನಿಸಿದೆ, ಬೆಳಗಿನ ಜಾವ ೯, ಬೆರಳೆಣಿಕೆಯಷ್ಟು ಮಂದಿ ರಸ್ತೆಯಲ್ಲಿ ನಡೆದಾಡುತ್ತಿದ್ದರು. ೨ ಮುದ್ದಾದ ಬೆಕ್ಕಿನ ಮರಿಗಳು ರಸ್ತೆಯ ಪಕ್ಕದ ಲಂಟಾನ ಪೊದೆಯೊಳಗಿಂದ ಕುಪ್ಪಳಿಸಿ ಈಚೆಗೆ ಬಂದವು, ಎರಡರ ಮೈಮೇಲೆಯೂ ಚಿರತೆಯ ಮರಿಗಳಂತೆಯೇ ಚುಕ್ಕಿಗಳು, ಸಹಜಾತರೆಂಬುದರಲ್ಲಿ ಸಂದೇಹವಿಲ್ಲ. ಬೈಕ್ ನ್ನು ಅದರ ಕಾಲಮೇಲೆ(ಸ್ಟಾಂಡ್) ನಿಲ್ಲಿಸಿ ಮೆಲ್ಲನೆ ಮರಿಗಳ ಹತ್ತಿರ ಬಂದೆ, ಅವುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಂತೆಯೇ ಎರಡೂ ಮತ್ತೆ ಪೊದೆಯೊಳಕ್ಕೆ ಸೇರಿಕೊಂಡವು. ಯಾರಾದರೂ ನನ್ನನ್ನು ಗಮನಿಸುತ್ತಿದ್ದಾರೆಯೇ ಎಂಬ ಪರಿವೆಯೂ ಇಲ್ಲದೆ ಮರಿಗಳು ಪೊದೆಯಿಂದ ಹೊರಬರುವುದನ್ನೇ ಕಾಯುತ್ತಾ ಕುಳಿತೆ. ನಿಸ್ಸಂಶಯವಾಗಿ ಯಾರೋ ಪುಣ್ಯಾತ್ಮರು ತಂದು ಮರಿಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ, ಬೀದಿ ನಾಯಿಗಳು ಸದಾ ಓಡಾಡುವ ಜಾಗ ಬೇರೆ ಮರಿಗಳನ್ನು ಕಂಡರಂತೂ ಕಥೆ ಮುಗಿದಂತೆಯೇ. ಅಷ್ಟರಲ್ಲಿ ಕಿಟ್ಟಿ ಪೊದೆಯಿಂದ ಹೊರಗೆ ಬಂದ ನನ್ನ ಕೈಯಲ್ಲಿ ಬಂಧಿಯಾಗಿದ್ದ, ಯಾವುದೇ ಪ್ರತಿರೋಧವಿಲ್ಲದೆ(ಕಚ್ಚದೆ,ಪರಚದೆ) ನನಗೆ ಶರಣಾಗಿದ್ದ. ಹಿಡಿದದ್ದಾಯಿತು ಇನ್ನು ಮನೆಗೆ ಕೊಂಡೊಯ್ಯುವುದೆಂತು ನನ್ನ ತಲೆ ಸ್ವಲ್ಪ ಬಿಸಿಯಾಯಿತು. ನನ್ನ ಕ್ಯಾಮರಾ ಖರೀದಿಸಿದಾಗ ಸಿಕ್ಕಿದ್ದ ಚೀಲದಲ್ಲಿ ಕುಡಿಯುವುದಕ್ಕಾಗಿ ನೀರಿನ ಬಾಟಲಿಯನ್ನು ಹಾಕಿ ತಂದಿದ್ದೆ. ಅದೇ ಚೀಲದಲ್ಲಿ ಕಿಟ್ಟಿಯನ್ನು ತುಂಬಿಸಿ ಕೊಂಡೊಯ್ಯುವ ನಿರ್ಧಾರ ಮಾಡಿ ಅವನನ್ನು ಚೀಲದೊಳಗೆ ಕುಳ್ಳಿರಿಸಿದೆ. ಕಿಟ್ಟಿಯ ಕಿರುಚಾಟ ಮುಗಿಲು ಮುಟ್ಟಿತ್ತು, ಅಗಲ ಬಾಯಿಯ ಚೀಲದ ಬಾಯನ್ನು ಒಂದು ಕೈಯಿಂದ ಮುಚ್ಚಿ ಮತ್ತೊಂದು ಕೈಯಲ್ಲಿ ಬೈಕ್ ಚಲಾಯಿಸುತ್ತಾ ಹೊಂಡಗಳನ್ನು ಹಾರಿ,ಕಿಟ್ಟಿಯ ತಲೆ ಹೊರಬರುತ್ತಿದ್ದಂತೆ ಮೆಲ್ಲನೆ ನೋವಾಗದಂತೆ ಒಳಗೆ ತುರುಕುತ್ತಾ, ಹೇಗೋ ಮನೆಗೆ ತಲುಪಿದೆ. ಚೀಲವನ್ನು ಕೆಳಗಿರಿಸುತ್ತಿದ್ದಂತೆಯೇ ಹೊರಬಂದ ಕಿಟ್ಟಿ ಚೀರಾಡುತ್ತಾ ಮನೆಯಿಡೀ ಓಡಾಡ ತೊಡಗಿದ.
ಅಮ್ಮನಿಗೆ ಸಾಕುಪ್ರಾಣಿಗಳೆಂದರೆ ಇಷ್ಟವೇ, ಆದರೆ ಅವು ತನ್ನ ಮೈಮೇಲೆ ಏರಿದರೆ ಮಾತ್ರ ಅಸಹ್ಯ. ಕಿಟ್ಟಿಗೆ ಹಾಲೆರೆದು ತಟ್ಟೆಯ ಬಳಿ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಹಾಲು ಕುಡಿದು ಮತ್ತೆ ಪುನಃ ಮನೆಯೆಲ್ಲಾ ಓಡಾಡತೊಡಗಿದ. ಆತನ ರೋದನ ಮತ್ತೆ ಮುಂದುವರಿದಿತ್ತು. ಸಂಜೆಯಾಗುವಷ್ಟರಲ್ಲಿ ಕಿಟ್ಟಿ ಶಾಂತನಾಗಿ ನಮ್ಮ ಮನೆಯವನಾಗಿಬಿಟ್ಟ.
ಮೊದಮೊದಲು ಕಿಟ್ಟಿ ಗೆ ಶೌಚದ್ದೇ ದೊಡ್ಡ ಸಮಸ್ಯೆಯಾಗಿತ್ತು, ಆತನಿಗೆಂದು ಮರಳಿನ ರಾಶಿಯನ್ನು ತಂದು ಡಿಟಿ ಎಚ್ ನ ಬಾಣಲೆಯಲ್ಲಿ ಹಾಕಿ, ಪ್ರತೀಬಾರಿ ಆತನಿಗೆ ಬಹಿರ್ದೆಸೆಗೆ ಹೋಗಬೇಕಾದಾಗ ಮರಳಿನ ಮೇಲೆ ಬಿಟ್ಟು ಅಭ್ಯಾಸ ಮಾಡಿಸಿದೆವು. ಪದೇ ಪದೇ ತೆರಳಿ ಮರಳೆಲ್ಲಾ ಹಾಳಾದಾಗ ಮತ್ತೆ ಮರಳು ತುಂಬಿಸಿಡುವ ಕೆಲಸ ಬಹಳ ತ್ರಾಸದಾಯಕವಾಗಿದ್ದುದ್ದರಿಂದ ಆತನನ್ನು ಮನೆಯಿಂದ ಹೊರಗೆ ಖಾಲಿ ಜಾಗದಲ್ಲಿ ಬಿಡಲಾರಂಭಿಸಿದೆವು, ನಾವು ಧೈರ್ಯಕ್ಕೆ ಜತೆಗೆ ನಿಂತಲ್ಲಿ, ಮಣ್ಣಿನಲ್ಲಿ ಹೊಂಡತೋಡಿ, ನಾಯಿಗಳ ಓಡಾಟವಿಲ್ಲವೆಂದು ಖಚಿತಪಡಿಸಿ, ದೇಹವನ್ನು ಹಿಗ್ಗಿಸಿ ನಮ್ಮ ಇರುವಿಕೆಯನ್ನು ನಗಣ್ಯವಾಗಿಸಿ ಮುಗಿಸಿ ಹೊಂಡಮುಚ್ಚಿ ಬರುತ್ತಿದ್ದ.ಒಮ್ಮೊಮ್ಮೆ ಬಾತ್ ರೂಮ್ ಒಳಗಡೆ ಮೂಲೆಯಲ್ಲಿ ಮೂತ್ರವಿಸರ್ಜಿಸುತ್ತಿದ್ದ. ಆತನ ಹೊಟ್ಟೆ ಸರಿ ಇಲ್ಲದಿದ್ದಾಗಲೆಲ್ಲ ರಾತ್ರಿವೇಳೆ ನಮ್ಮ ಡೋರ್ ಮ್ಯಾಟ್ ಕೊಳಕಾಗಿರುತ್ತಿತ್ತು , ಕೆಲವೊಮ್ಮೆ ರಾತ್ರಿವೇಳೆ ಡೋರ್ ಮ್ಯಾಟ್ ಗಳನ್ನು ತೆಗೆದಿರಿಸಿದ್ದೂ ಇದೆ. ಅಂತೂ ಇಂತೂ ಕಿಟ್ಟಿ ಕೊನೆಗೂ ದೊಡ್ಡವನಾದ, ಸ್ವಚ್ಛವಾದ ಅಭ್ಯಾಸಗಳನ್ನು ಮೈಗೂಡಿಸಿಕೊಂಡ.
ಕಿಟ್ಟಿ ಸಣ್ಣವನಾಗಿದ್ದಾಗ ತಡೆರಹಿತವಾಗಿ, ಬೆಂಗಳೂರಿನ ವಾಹನ ಸವಾರರು ಹಾರ್ನ್ ಬಾರಿಸಿದಂತೆ ಮೇವ್ ಮೇವ್ ಎಂದು ಕೂಗುತ್ತಿದ್ದ. ಎಷ್ಟು ಹಾಲುಣಿಸಿದರೂ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಭಾಸವಾಗುತ್ತಿತ್ತು. ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದ ,ಹಾಲಿನ ಜತೆಗೆ ಬೆರೆಸಿದ ಅನ್ನ ತಟ್ಟೆಯಲ್ಲೇ ಉಳಿದುಬಿಡುತ್ತಿತ್ತು. ಕೆಲವೊಮ್ಮೆ ಯಾಕಪ್ಪಾ ಈರೀತಿ ಅಳುತ್ತಿದ್ದಾನೆ ಎನ್ನಿಸುತ್ತಿತ್ತು. ಮುಗ್ಧವಾಗಿ ನಮ್ಮ ಮುಖವನ್ನೇ ನೋಡಿ ಮೇವ್ ಮೇವ್ ಎಂದು ಕೂಗುತ್ತಿದ್ದ ಕಿಟ್ಟಿಯ ಮುಖ ಸಣ್ಣ ಮಕ್ಕಳಂತೆಯೇ ಕಾಣಿಸುತ್ತಿತ್ತು. ಸಂಜೆಯ ವೇಳೆಯಲ್ಲಿ ಒಮ್ಮೊಮ್ಮೆ ಚೆಂಡಿನ ಜತೆಗೆ ಆಟವಾಡತೊಡಗಿದರೆ ಘಂಟೆಗಟ್ಟಲೆ ಚೆಂಡನ್ನು ಉರುಳಿಸುತ್ತಾ ಅದರ ಜತೆ ಸಣ್ಣ ಮಕ್ಕಳಂತೆಯೇ ಆಟವಾಡುತ್ತಿದ್ದ.
ಬರಬರುತ್ತಾ ಕಿಟ್ಟಿಯ ಸ್ವಭಾವದಲ್ಲಿ ಪರಿವರ್ತನೆ ಕಾಣಲಾರಂಭಿಸಿತು, ಆತನ ಕಿರುಚಾಟ ಕಡಿಮೆಯಾಯಿತು, ಮನೆಯಿಂದ ಹೊರಹೋಗಬೇಕಾಗಿದ್ದಲ್ಲಿ ಬಾಗಿಲ ಬಳಿಗೆ ಬಂದು ಚಿಲಕವನ್ನೇ ನೋಡಿ ಮೇವ್ ಮೇವ್ ಎನ್ನುತ್ತಿದ್ದ. ಹಾಗೆ ಹೊರಗಡೆಯಿಂದ ಬಂದು ಬಾಗಿಲ ಬಳಿ ನಿಂತು ನಮ್ಮನ್ನು ಕೂಗಿ ಕರೆದು ಬಾಗಿಲು ತೆರೆಸುತ್ತಿದ್ದ, ಮುಂದಿನ ಬಾಗಿಲನ್ನು ತೆರೆಯಲು ಯಾರೂ ಬರದಿದ್ದಲ್ಲಿ ನಮ್ಮ ಅಪಾರ್ಟ್ ಮೆಂಟ್ ಬ್ಲಾಕ್ ಗೆ ಒಂದು ಸುತ್ತು ಬಂದು ಹಿಂದಿನ ಬಾಗಿಲಿನ ಬಳಿ ಬಂದು ಕೂಗುತ್ತಿದ್ದ. ಹಾಲು ಬೇಕಾದಲ್ಲಿ ನಮ್ಮಲ್ಲಿ ಯಾರಾದರೂ ನಿಂತಿದ್ದವರ ಕಾಲುಗಳಿಗೆ ಪದೇ ಪದೇ ಸುತ್ತಿ ಸುತ್ತಿ ಸುಳಿದು ಕೂಗುತ್ತಿದ್ದ. ಆತನ ಊಟದ ಬಟ್ಟಲ ಬಳಿಯಲ್ಲಿ ಕಸದ ಬುಟ್ಟಿ ಇದೆ. ಅದೇ ಆತನ ಸಿಂಹಾಸನ, ಅದರ ಮೇಲೆ ಹತ್ತಿ ಕುಳಿತು ಅಡಿಗೆ ಮನೆಯಲ್ಲಿ ಅಮ್ಮ ನ ಮುಖ ನೋಡಿ ಕೂಗಿ ಕರೆಯುತ್ತಿದ್ದ. ಎಲ್ಲದಕ್ಕಿಂತ ಮುಖ್ಯವಾಗಿ ಆತನ ಅಳು ನಿಂತಿತ್ತು, ಬೇಕಾದಾಗ ಮಾತ್ರ ಕೂಗುತ್ತಿದ್ದ. ಉಳಿದ ಸಮಯದಲ್ಲಿ ಹಗಲು ಪುಸ್ತಕದ ಮೇಲೋ, ಪೇಪರ್ ಮೇಲೋ ಅಥವಾ ನನ್ನ ಬ್ಯಾಗ್ ನ ಮೇಲೋ ಬಿದ್ದು ನಿದ್ದೆ ಮಾಡುತ್ತಿದ್ದ, ರಾತ್ರಿವೇಳೆ ಹೊರಗಡೆ ತಿರುಗಾಡುತ್ತಿದ್ದ. ಒಂದೆರಡು ಬಾರಿ ಇಲಿ ಹಿಡಿದು ಮನೆಯೊಳಕ್ಕೆ ತಂದು ಬಿಟ್ಟಿದ್ದ , ಬೈದು ಹೊರಗಟ್ಟಿದ ಬಳಿಕ ಮನೆಯ ಹೊರಗೆ ಎರಡು ಅಪಾರ್ಟ್ ಮೆಂಟ್ ಗಳ ನಡುವೆ ವೆಂಟಿಲೇಷನ್ ಗಾಗಿ ಬಿಟ್ಟಿದ್ದ ಜಾಗದಲ್ಲಿ ಇಟ್ಟು ತಿನ್ನುತ್ತಿದ್ದ.
ಕಿಟ್ಟಿಗೂ ಅಮ್ಮನಿಗೂ ಅದೆಂತಹಾ ಬಾಂಧವ್ಯ ಬೆಳೆಯಿತೆಂದರೆ ಬೆಕ್ಕು ಮೈಮೇಲೆ ಹತ್ತಿದರೆ ದೂರ ತಳ್ಳುತ್ತಿದ್ದ ಅಮ್ಮನ ಮಡಿಲ ಮೇಲೆ ಕಿಟ್ಟಿ ಬಂದು ಕುಳಿತುಕೊಳ್ಳುತ್ತಿದ್ದರೆ ಅಮ್ಮ ನಯವಾಗಿ ಅದರ ಮೈ ಸವರಿ ಮಾತನಾಡಿಸುತ್ತಿದ್ದರೆ ಮೇವ್ ಎಂದು ಪ್ರತಿಸ್ಪಂದಿಸುತ್ತಿದ್ದ.ಅಮ್ಮ ಚಾಪೆ ಮೇಲೆ ಮಲಗಿದ್ದಲ್ಲಿ ಅಮ್ಮನಿಗೆ ತಾಗಿ ಅಮ್ಮನ ಸೀರೆಯ ಮೇಲೆ ಕಿಟ್ಟಿ ಮಲಗುತ್ತಾನೆ. ಕಿಟ್ಟಿ ಕೂಗಿದ ತಕ್ಷಣ ಅಮ್ಮ ಅವನಿಗೆ ಹಾಲೆರೆದು ತಲೆಸವರಿ ಮುದ್ದಿನಿಂದ ಮಾತನಾಡುತ್ತಾಳೆ. ಅಮ್ಮ ಒಮ್ಮೊಮ್ಮೆ ಅವನನ್ನೆತ್ತಿ ಮಕ್ಕಳಂತೆ ಎತ್ತಿಕೊಳ್ಳುವುದೂ ಇದೆ.


ಕಿಟ್ಟಿಯನ್ನು ಯಾರೂ ಎತ್ತಿಕೊಂಡು ಮುದ್ದು ಮಾಡುವಂತಿಲ್ಲ, ಅಮ್ಮನ ಹೊರತಾಗಿ, ನಮ್ಮ ಮನೆಯಲ್ಲಿ ಬೇರೆ ಯಾರ ಸ್ಪರ್ಶವೂ ಅವನಿಗೆ ಇಷ್ಟವಾಗುವುದಿಲ್ಲ, ಅವರ ಕೈಯಿಂದ ಜಿಗಿದು ಕಿಟ್ಟಿ ಗೊಣಗುತ್ತಾ ನಡೆಯುತ್ತಾನೆ. ಹಾಲೆರೆಯುವುದಕ್ಕೆ ಯಾರಾದರೂ ಅಡ್ಡಿಯಿಲ್ಲ.
ಕಿಟ್ಟಿ ನಮ್ಮ ಕುಟುಂಬದ ಸದಸ್ಯನಂತೆಯೇ ನಮ್ಮ ಮನಸ್ಸಿನಲ್ಲಿ ಬೆರೆತಿದ್ದಾನೆ, ಕಿಟ್ಟಿಯ ಕಾರಣದಿಂದಾಗಿ ನಾವು ಮನೆ ಖಾಲಿ ಬಿಟ್ಟು ಬೀಗ ಹಾಕಿ ದಿನಗಟ್ಟಲೆ ಹೋಗುವುದಿಲ್ಲ, ಆತನನ್ನು ನೋಡಿಕೊಳ್ಳುವುದಕ್ಕೆ ಯಾರಾದರೂ ಇರುತ್ತೇವೆ. ಮನೆಯಿಂದ ಹೊರಹೋದವರು ವಾಪಾಸು ಬಂದ ತಕ್ಷಣ ಕೇಳುವುದು ಕಿಟ್ಟಿ ಎಲ್ಲಿದ್ದಾನೆ ಎಂದು, ನಾವು ಮನೆಗೆ ಬರುವಾಗ ಕೆಲವೊಮ್ಮೆ ಸ್ವಾಗತಕ್ಕೆ ಕಿಟ್ಟಿ ಇದುರಾಗುತ್ತಾನೆ. ಆತನ ಆಟ, ಮಂಗಾಟ, ಹಠ, ಪ್ರೀತಿಗೆ ಮನೆಯಲ್ಲಿನ ಎಲ್ಲರೂ ಸೋಲುತ್ತಾರೆ. ಕಿಟ್ಟಿ ಬೆಕ್ಕಾದರೂ ನಮ್ಮ ಮನೆಯವನೇ ಆಗಿದ್ದಾನೆ, ನಮ್ಮ ಮೊಗದಲ್ಲಿ, ಮನಸ್ಸಿನಲ್ಲಿ ನಗುವನ್ನು ಅರಳಿಸಿದ್ದಾನೆ, ನಮ್ಮ ಜತೆಗೆ ಬೆರೆತು ಮನಸ್ಸು ಹಗುರಾಗುವಂತೆ ಮಾಡಿದ್ದಾನೆ, ಮನಸ್ಸಿನ ಎಷ್ಟೋ ಚಿಂತೆಗಳು, ಸಮಸ್ಯೆಗಳು ಆತನ ಆಟದ ಮುಂದೆ, ಮುಗ್ಧ ನೋಟದ ಮುಂದೆ ಮರೆತುಹೋಗುತ್ತವೆ.
ಹಲವು ಮನೆಗಳಲ್ಲೂ ಇಂತಹಾ ಕಿಟ್ಟಿಯರು ಇರುತ್ತಾರೆ, ಅವರಿಂದಾಗಿ ನಮಗರಿವಿಲ್ಲದೆಯೇ ಅದೆಷ್ಟು ಬಾರಿ ನಮ್ಮ ಮುಖದಲ್ಲಿ ನಗುವರಳಿದೆ. ಸಾಕು ಪ್ರಾಣಿಗಳು ನಮ್ಮನ್ನು ಅದೆಷ್ಟು ಹೊಂದಿಕೊಂಡಿರುತ್ತವೆ ,
ಕೆಲವೊಮ್ಮೆ ನಮ್ಮ ಅನುಪಸ್ತಿಯಲ್ಲಿ ಆಹಾರ ಸೇವನೆಗೂ ಅವು ಮುಂದಾಗುವುದಿಲ್ಲ, ನಮಗೇನಾದರೂ ಅಸೌಖ್ಯವುಂಟಾದಲ್ಲಿ, ನೋವಾಗಿದ್ದಲ್ಲಿ ಅವುಗಳೂ ಭಾವನಾತ್ಮಕವಾಗಿ ಸ್ಪಂದಿಸುತ್ತವೆ.
ಇವೆಲ್ಲವನ್ನು ಅನುಭವಿಸಬೇಕೆಂದಿದ್ದರೆ ನಮಗೂ ಪ್ರಾಣಿಗಳ ಮೇಲೆ ಪ್ರೀತಿ, ಅನುಕಂಪ, ಗೌರವಗಳಿರಬೇಕು, ಆಗಲೇ ಬದುಕು ಸಾರ್ಥಕ.
Tuesday, May 14, 2013
ಪುಟ್ಟ ಕರು
ನಾನು ಅದೆಷ್ಟೋ ಛಾಯಾ ಚಿತ್ರಗಳನ್ನು ತೆಗೆದಿರಬಹುದು ಆದರೆ ನನ್ನನ್ನು ಮತ್ತೆ ಮತ್ತೆ ಮತ್ತೆ ಮತ್ತೆ ತನ್ನೆಡೆಗೆ ಯಾವತ್ತೂ ಸೆಳೆಯುತ್ತಿರುವುದು ಈ ಮುದ್ದು ಕರುವಿನ ಚಿತ್ರ. ಅದರ ಕಣ್ಣುಗಳಲ್ಲಿನ ಭಾವ,ಅದರ ಮೈಮೇಲಿನ ಚಿತ್ತಾರದಂತೆ ಗೋಚರಿಸುವ ಬಿಳಿಯ ಮಚ್ಚೆಗಳು, ಕಿವಿಯರಳಿಸಿ ನನ್ನನ್ನೇ ಗಮನಿಸುತ್ತಿದ್ದ ಆ ಕ್ಷಣಗಳು ಎಂದೆಂದಿದಗೂ ಹಸಿರಾಗಿ ದಾಖಲುಗೊಂಡಿವೆ. ಆ ಕರು ಎಲ್ಲಿದೆಯೋ,ಹೇಗಿದೆಯೋ? ಇದೆಯೋ ಇಲ್ಲವೋ ಹಲವಾರು ಬಾರಿ ನನಗೆ ಹೀಗನ್ನಿಸಿದ್ದುಂಟು . ಈ ಕರುವಿನ ಕಣ್ಣುಗಳ್ಲ್ಲಲ್ಲಿ, ಅದೆಷ್ಟು ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ ಅನ್ನಿಸಿದ್ದುಂಟು. ನಮಗೂ ಮೂಕಪ್ರಾಣಿಗಳಿಗೂ ಎನೋ ಒಂದು ನಂಟಿದೆ ಎಂಬುದಂತೂ ಸತ್ಯ.
ಮಾಂಸಾಹಾರಿಗಳು ಮುಂದಿನ ಬಾರಿ ತಟ್ಟೆಯಲ್ಲಿರುವುದನ್ನು ಬಾಯಿಯಲ್ಲಿರಿಸುವ ಮೊದಲು ಸ್ವಲ್ಪ ಯೋಚಿಸಿ, ನಿಮಗೇನೂ ಅನ್ನಿಸುವುದಿಲ್ಲವೇ ?
Sunday, March 24, 2013
ಸಾರ್ಥಕ್ಯ
೩೫ ವರ್ಷಗಳಿಂದ ತಮ್ಮ ಉಸಿರಲ್ಲಿ ಉಸಿರಿನಂತೆ ಬೆರೆತಿದ್ದ ಅಂಗಡಿಯಿಂದ ಹೊರಗೆ ಬಂದ ಭಟ್ಟರು ಕೊನೆಯ ಬಾರಿಗೆ ಎಂಬಂತೆ ಹಿಂತಿರುಗಿ ನೋಡಿ ದೀರ್ಘವಾದ ಉಸಿರೊಂದನ್ನು ಬಿಟ್ಟರು.ಅವರು ತಮ್ಮ ತಂದೆಯಿಂದ ಬಂದಿದ್ದ ವಹಿವಾಟನ್ನು ಸರಸ್ವತೀ ಸೇವೆ ಎಂಬುದಾಗಿ ಭಾವಿಸಿ ಪುಸ್ತಕದ ಮಳಿಗೆಯನ್ನು ನಡೆಸುತ್ತ ಬಂದಿದ್ದರು. ಭಾರೀ ಎಂಬಂತೆ ದೊಡ್ಡದಲ್ಲವಾದರೂ ಸಣ್ಣದೂ ಅಲ್ಲವೆಂಬಂತೆ, ನಗರದ ತುಸು ಹೊರಗೆ ಚೆನ್ನಾಗಿ ವ್ಯವಹಾರ ಬೆಳೆದು ನಿಂತಿತ್ತು. ತಮ್ಮ ಗೆಳೆಯ ದಿನೇಶ ಕಾಮತರ ದೂರದ ಸಂಬಂಧಿಯೊಬ್ಬ ಭಟ್ಟರ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
ಭಟ್ಟರ ಧರ್ಮಪತ್ನಿ ಭಾರತಿ ಸದ್ಗುಣಿ, ಸರಳ ವ್ಯಕ್ತಿತ್ವದ ನಗುಮುಖದಿಂದ ಎಲ್ಲರನ್ನೂ ಆದರದಿಂದ , ಪ್ರೀತಿಯಿಂದ ಕಾಣುತಿದ್ದರು. ಈರ್ವರು ಮಕ್ಕಳನ್ನು ಪಡೆದಿದ್ದ ದಂಪತಿ, ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದರು, ಮಗ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ.
ಬೀದಿಗಿಳಿದು, ಪ್ರತಿದಿನವೂ ತಮ್ಮ ಬಜಾಜ್ ಸ್ಕೂಟರನ್ನು ನಿಲ್ಲಿಸುತ್ತಿದ್ದ ಮರದ ಬುಡಕ್ಕೆ ಬಂದ ಭಟ್ಟರು ಸ್ಕೂಟರ್ ಹತ್ತಿ ಮನೆಗೆ ಹೊರಟರು.
ನಗರದಿಂದ ಹೊರಕ್ಕೆ ಬಂದು ತಮ್ಮ ಗ್ರಾಮದೆಡೆಗೆ ತಿರುಗಿ ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಹತ್ತು ವರ್ಷಗಳ ಹಿಂದಿದ್ದ ತಮ್ಮ ಊರಿಗೂ ಇಂದಿರುವ ತಮ್ಮ ಊರಿಗೂ ಕಾಣುವ ವ್ಯತ್ಯಾಸಗಳನ್ನು ಯೋಚಿಸುತ್ತಾ ತಮ್ಮ ಮನೆಯ ಅಂಗಳವನ್ನು ತಲುಪಿದರು
ಶ್ರೀರಾಮನ ಆದರ್ಶಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡಿದ್ದ ಹಿರಿಯರು ಭಟ್ಟರ ಊರನ್ನು ಶ್ರೀರಾಮಪುರವೆಂದು ಕರೆಯಲು ಪ್ರಾರಂಭಿಸಿದ್ದರಂತೆ. ಹಳ್ಳಿಯಲ್ಲಿ ಪುರಾತನವಾದ ಶ್ರೀರಾಮ ಮಂದಿರವೊಂದಿತ್ತು, ಊರ ಮಂದಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ನಂಬಿಕೊಂಡು ಬಂದಿದ್ದರು.
ಪ್ರತೀ ಹಳ್ಳಿಯಂತೆ ಅಂಚೆ ಕಛೇರಿ, ಶಾಲೆ , ನಾಲ್ಕಾರು ಅಂಗಡಿಗಳು ಹಾಗೂ ಸದಾ ಶುದ್ಧವಾದ ಸ್ಫಟಿಕ ಜಲದಿಂದ ತುಂಬಿಕೊಂಡು ಊರ ಕಳೆಯನ್ನು ಹೆಚ್ಚಿಸಿದ್ದ ಕೆರೆಯೂ ಇತ್ತು. ಊರಿನಲ್ಲೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕೆಂಬ ಭಟ್ಟರ ಆಸೆ ಅವರನ್ನು ತಿಳಿದಿದ್ದ ಎಲ್ಲರಿಗೂ ಅರಿವಿತ್ತು. ಭಟ್ಟರು ಯಾರಲ್ಲೂ ಈ ಬಗ್ಗೆ ಗಹನವಾಗಿ ಹೇಳಿಕೊಂಡಿರದಿದ್ದರೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ವಿಷಯ ನುಸುಳಿಬಿಡುತ್ತಿತ್ತು.
ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು. ಮಧ್ಯಾಹ್ನವಾಗುವುದರ ಮುಂಚೆಯೇ ಮರಳಿಬಂದಿದ್ದ ಭಟ್ಟರನ್ನು ಕಂಡ ಅವರ ಪತ್ನಿ ಆಶ್ಚರ್ಯಗೊಂಡರೂ ಏನನ್ನೂ ಕೇಳದೆ ಬಾಯಾರಿಕೆಗೆ ತಣ್ಣಗಿನ ಮಜ್ಜಿಗೆ ನೀರನ್ನು ತಂದು ಕೊಟ್ಟು ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತಲ್ಲೀನರಾದರು. ಭಟ್ಟರು ಆ ದಿನ ರಾತ್ರಿ ಕುಳಿತು ಪತ್ರವೊಂದನ್ನು ಬರೆಯುತ್ತಿದ್ದರು, ಅವರ ಪತ್ನಿ ಕುತೂಹಲದಿಂದ ಬಳಿಬಂದು ಭಟ್ಟರು ಪತ್ರ ಕೊನೆಗೊಳಿಸುವವರೆಗೆ ಜತೆಗೆ ಕುಳಿತಿದ್ದರು.
ಆರು ತಿಂಗಳ ಬಳಿಕ ಭಟ್ಟರ ಊರಿನಲ್ಲಿ ಗ್ರಂಥಾಲಯದ ಉದ್ಘಾಟನೆ ನಡೆಯಿತು, ಭಟ್ಟರ ಸಂಗ್ರಹದಲ್ಲಿದ್ದ ನೂರಾರು ಪುಸ್ತಕಗಳು ಗ್ರಂಥಾಲಯದ ಕಪಾಟುಗಳಲ್ಲಿ ಆನಂದವಾಗಿ ನಗುತ್ತಿದ್ದಂತೆ ಕಂಡುಬರುತ್ತಿತ್ತು. ಭಟ್ಟರ ಪತ್ನಿ ಮಗ ಹಾಗೂ ಮಗಳು ತಮ್ಮದೇ ಮನೆಯ ಕಾರ್ಯಕ್ರಮದಂತೆ ಸಂಭ್ರಮದಿಂದ ಉಸ್ತುವಾರಿ ವಹಿಸಿಕೊಂಡು ಪಾಲ್ಗೊಂಡರು. ಭಟ್ಟರ ಪುಸ್ತಕಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ ಕಾಮತರ ಸಂಬಂಧಿ ಗ್ರಂಥಪಾಲಕರಾಗಿ ನೇಮಕಗೊಂಡಿದ್ದರು. ಸರ್ಕಾರದಿಂದ ಗ್ರಂಥಾಲಯಕ್ಕಾಗಿ ೫೦ ಸಾವಿರ ರೂ ಧನಸಹಾಯ ದೊರಕಿತ್ತು. ಕೆಲವು ವರುಷಗಳ ಹಿಂದೆ ಭಟ್ಟರು ಶ್ರೀರಾಮಪುರದ ಶಾಲೆಯ ಬಳಿ ೫ ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ನಗರದಲ್ಲಿದ್ದ ಭಟ್ಟರ ಪುಸ್ತಕ ಮಳಿಗೆಯನ್ನು ಮಾರಾಟ ಮಾಡಿ ಬಂದಿದ್ದ ಹಣದಿಂದ ಗ್ರಂಥಾಲಯದ ಕಟ್ಟದ ನಿರ್ಮಾಣ ಮಾಡಲಾಗಿತ್ತು. ಭಟ್ಟರ ಮಗ ಉಳಿದ ಇನ್ನಿತರ ವೆಚ್ಚಗಳನ್ನು ನಿರ್ವಹಿಸಿದ್ದರು.
ಭಟ್ಟರು ಆದಿನ ಬರೆದ ಕಾಗದವನ್ನು ಅವರ ಪತ್ನಿ ಮರುದಿನ ಅಂಚೆಯಲ್ಲಿ ಕಳುಹಿಸಿದ್ದರು. ಕೆಲವಾರು ಅಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಕಳಿಸಿಕೊಡುವಂತೆ ಪ್ರಕಾಶಕರೋರ್ವರಿಗೆ ಭಟ್ಟರು ಹೇಳಿ ಕಳುಹಿಸಿದ್ದ ಪತ್ರವದು. ೩ ತಿಂಗಳ ಬಳಿಕ ಪುಸ್ತಕಗಳನ್ನು ಸಂಗ್ರಹಿಸಿ ಭಟ್ಟರ ವಿಳಾಸಕ್ಕೆ ಪ್ರಕಾಶಕರು ಕಳುಹಿಸಿಕೊಟ್ಟಿದ್ದರು.
ಗ್ರಂಥಾಲಯದ ಗೋಡೆಯ ಮೇಲೆ ತೂಗುಹಾಕಲ್ಪಟ್ಟಿದ್ದ ಭಟ್ಟರ ಚಿತ್ರಪಟಕ್ಕೆ ಹೂಹಾರ ಹಾಕಲಾಗಿತ್ತು. ನೆರೆದಿದ್ದ ಊರಿನ ಹಿರಿಯರ ಮಕ್ಕಳ ಹೆಂಗಳೆಯರ ಸಂತಸವನ್ನು ಕಂಡ ಭಟ್ಟರು ತಮ್ಮ ಕನಸು ನನಸಾದ ಸಾರ್ಥಕತೆಯಿಂದ ಧನ್ಯತೆಯ ಮಂದಹಾಸವನ್ನು ಬೀರುತ್ತಿದ್ದಂತೆ ಕಂಡುಬಂತು.
ಭಟ್ಟರ ಧರ್ಮಪತ್ನಿ ಭಾರತಿ ಸದ್ಗುಣಿ, ಸರಳ ವ್ಯಕ್ತಿತ್ವದ ನಗುಮುಖದಿಂದ ಎಲ್ಲರನ್ನೂ ಆದರದಿಂದ , ಪ್ರೀತಿಯಿಂದ ಕಾಣುತಿದ್ದರು. ಈರ್ವರು ಮಕ್ಕಳನ್ನು ಪಡೆದಿದ್ದ ದಂಪತಿ, ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದರು, ಮಗ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ.
ಬೀದಿಗಿಳಿದು, ಪ್ರತಿದಿನವೂ ತಮ್ಮ ಬಜಾಜ್ ಸ್ಕೂಟರನ್ನು ನಿಲ್ಲಿಸುತ್ತಿದ್ದ ಮರದ ಬುಡಕ್ಕೆ ಬಂದ ಭಟ್ಟರು ಸ್ಕೂಟರ್ ಹತ್ತಿ ಮನೆಗೆ ಹೊರಟರು.
ನಗರದಿಂದ ಹೊರಕ್ಕೆ ಬಂದು ತಮ್ಮ ಗ್ರಾಮದೆಡೆಗೆ ತಿರುಗಿ ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಹತ್ತು ವರ್ಷಗಳ ಹಿಂದಿದ್ದ ತಮ್ಮ ಊರಿಗೂ ಇಂದಿರುವ ತಮ್ಮ ಊರಿಗೂ ಕಾಣುವ ವ್ಯತ್ಯಾಸಗಳನ್ನು ಯೋಚಿಸುತ್ತಾ ತಮ್ಮ ಮನೆಯ ಅಂಗಳವನ್ನು ತಲುಪಿದರು
ಶ್ರೀರಾಮನ ಆದರ್ಶಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡಿದ್ದ ಹಿರಿಯರು ಭಟ್ಟರ ಊರನ್ನು ಶ್ರೀರಾಮಪುರವೆಂದು ಕರೆಯಲು ಪ್ರಾರಂಭಿಸಿದ್ದರಂತೆ. ಹಳ್ಳಿಯಲ್ಲಿ ಪುರಾತನವಾದ ಶ್ರೀರಾಮ ಮಂದಿರವೊಂದಿತ್ತು, ಊರ ಮಂದಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ನಂಬಿಕೊಂಡು ಬಂದಿದ್ದರು.
ಪ್ರತೀ ಹಳ್ಳಿಯಂತೆ ಅಂಚೆ ಕಛೇರಿ, ಶಾಲೆ , ನಾಲ್ಕಾರು ಅಂಗಡಿಗಳು ಹಾಗೂ ಸದಾ ಶುದ್ಧವಾದ ಸ್ಫಟಿಕ ಜಲದಿಂದ ತುಂಬಿಕೊಂಡು ಊರ ಕಳೆಯನ್ನು ಹೆಚ್ಚಿಸಿದ್ದ ಕೆರೆಯೂ ಇತ್ತು. ಊರಿನಲ್ಲೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕೆಂಬ ಭಟ್ಟರ ಆಸೆ ಅವರನ್ನು ತಿಳಿದಿದ್ದ ಎಲ್ಲರಿಗೂ ಅರಿವಿತ್ತು. ಭಟ್ಟರು ಯಾರಲ್ಲೂ ಈ ಬಗ್ಗೆ ಗಹನವಾಗಿ ಹೇಳಿಕೊಂಡಿರದಿದ್ದರೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ವಿಷಯ ನುಸುಳಿಬಿಡುತ್ತಿತ್ತು.
ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು. ಮಧ್ಯಾಹ್ನವಾಗುವುದರ ಮುಂಚೆಯೇ ಮರಳಿಬಂದಿದ್ದ ಭಟ್ಟರನ್ನು ಕಂಡ ಅವರ ಪತ್ನಿ ಆಶ್ಚರ್ಯಗೊಂಡರೂ ಏನನ್ನೂ ಕೇಳದೆ ಬಾಯಾರಿಕೆಗೆ ತಣ್ಣಗಿನ ಮಜ್ಜಿಗೆ ನೀರನ್ನು ತಂದು ಕೊಟ್ಟು ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತಲ್ಲೀನರಾದರು. ಭಟ್ಟರು ಆ ದಿನ ರಾತ್ರಿ ಕುಳಿತು ಪತ್ರವೊಂದನ್ನು ಬರೆಯುತ್ತಿದ್ದರು, ಅವರ ಪತ್ನಿ ಕುತೂಹಲದಿಂದ ಬಳಿಬಂದು ಭಟ್ಟರು ಪತ್ರ ಕೊನೆಗೊಳಿಸುವವರೆಗೆ ಜತೆಗೆ ಕುಳಿತಿದ್ದರು.
ಆರು ತಿಂಗಳ ಬಳಿಕ ಭಟ್ಟರ ಊರಿನಲ್ಲಿ ಗ್ರಂಥಾಲಯದ ಉದ್ಘಾಟನೆ ನಡೆಯಿತು, ಭಟ್ಟರ ಸಂಗ್ರಹದಲ್ಲಿದ್ದ ನೂರಾರು ಪುಸ್ತಕಗಳು ಗ್ರಂಥಾಲಯದ ಕಪಾಟುಗಳಲ್ಲಿ ಆನಂದವಾಗಿ ನಗುತ್ತಿದ್ದಂತೆ ಕಂಡುಬರುತ್ತಿತ್ತು. ಭಟ್ಟರ ಪತ್ನಿ ಮಗ ಹಾಗೂ ಮಗಳು ತಮ್ಮದೇ ಮನೆಯ ಕಾರ್ಯಕ್ರಮದಂತೆ ಸಂಭ್ರಮದಿಂದ ಉಸ್ತುವಾರಿ ವಹಿಸಿಕೊಂಡು ಪಾಲ್ಗೊಂಡರು. ಭಟ್ಟರ ಪುಸ್ತಕಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ ಕಾಮತರ ಸಂಬಂಧಿ ಗ್ರಂಥಪಾಲಕರಾಗಿ ನೇಮಕಗೊಂಡಿದ್ದರು. ಸರ್ಕಾರದಿಂದ ಗ್ರಂಥಾಲಯಕ್ಕಾಗಿ ೫೦ ಸಾವಿರ ರೂ ಧನಸಹಾಯ ದೊರಕಿತ್ತು. ಕೆಲವು ವರುಷಗಳ ಹಿಂದೆ ಭಟ್ಟರು ಶ್ರೀರಾಮಪುರದ ಶಾಲೆಯ ಬಳಿ ೫ ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ನಗರದಲ್ಲಿದ್ದ ಭಟ್ಟರ ಪುಸ್ತಕ ಮಳಿಗೆಯನ್ನು ಮಾರಾಟ ಮಾಡಿ ಬಂದಿದ್ದ ಹಣದಿಂದ ಗ್ರಂಥಾಲಯದ ಕಟ್ಟದ ನಿರ್ಮಾಣ ಮಾಡಲಾಗಿತ್ತು. ಭಟ್ಟರ ಮಗ ಉಳಿದ ಇನ್ನಿತರ ವೆಚ್ಚಗಳನ್ನು ನಿರ್ವಹಿಸಿದ್ದರು.
ಭಟ್ಟರು ಆದಿನ ಬರೆದ ಕಾಗದವನ್ನು ಅವರ ಪತ್ನಿ ಮರುದಿನ ಅಂಚೆಯಲ್ಲಿ ಕಳುಹಿಸಿದ್ದರು. ಕೆಲವಾರು ಅಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಕಳಿಸಿಕೊಡುವಂತೆ ಪ್ರಕಾಶಕರೋರ್ವರಿಗೆ ಭಟ್ಟರು ಹೇಳಿ ಕಳುಹಿಸಿದ್ದ ಪತ್ರವದು. ೩ ತಿಂಗಳ ಬಳಿಕ ಪುಸ್ತಕಗಳನ್ನು ಸಂಗ್ರಹಿಸಿ ಭಟ್ಟರ ವಿಳಾಸಕ್ಕೆ ಪ್ರಕಾಶಕರು ಕಳುಹಿಸಿಕೊಟ್ಟಿದ್ದರು.
ಗ್ರಂಥಾಲಯದ ಗೋಡೆಯ ಮೇಲೆ ತೂಗುಹಾಕಲ್ಪಟ್ಟಿದ್ದ ಭಟ್ಟರ ಚಿತ್ರಪಟಕ್ಕೆ ಹೂಹಾರ ಹಾಕಲಾಗಿತ್ತು. ನೆರೆದಿದ್ದ ಊರಿನ ಹಿರಿಯರ ಮಕ್ಕಳ ಹೆಂಗಳೆಯರ ಸಂತಸವನ್ನು ಕಂಡ ಭಟ್ಟರು ತಮ್ಮ ಕನಸು ನನಸಾದ ಸಾರ್ಥಕತೆಯಿಂದ ಧನ್ಯತೆಯ ಮಂದಹಾಸವನ್ನು ಬೀರುತ್ತಿದ್ದಂತೆ ಕಂಡುಬಂತು.
Wednesday, March 6, 2013
ಹಾಚಿ ಎಂಬ ಶ್ವಾನದ ಕಥೆ
ನೀವು ಸಾಕು ಪ್ರಾಣಿಗಳನ್ನು ಅದರಲ್ಲೂ ಶ್ವಾನ ಪ್ರಿಯರಾಗಿದ್ದಲ್ಲಿ ನೋಡಲೇಬೇಕಾದಂತಹ
ಅತ್ಯಂತ ಅದ್ಭುತ ಚಿತ್ರ ಹಾಚಿ ಎ ಡಾಗ್ಸ್ ಟೇಲ್( ಹಾಚಿ ಎಂಬ ಶ್ವಾನದ ಕಥೆ). ಈ ಕಥೆಯು
ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದು, ಮನಕಲಕುವಂತಹಾ ಸಂಭಾಷಣೆ, ಭಾವನಾತ್ಮಕ
ಅಭಿನಯ ಹಾಗೂ ಸನ್ನಿವೇಶಗಳಿಂದ ಕೂಡಿ ಐ ಎಮ್ ಡಿ ಬಿ(www.imdb.com) ಪುಟದಲ್ಲಿ ೮ ಅಂಕಗಳನ್ನು
ಗಳಿಸಿರುವುದು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತದೆ.
ಈ ಕಥೆಯ ಪೂರ್ವಾರ್ಧ ಹಾಚಿ ಮತ್ತು ಅದರ ಯಜಮಾನನ ನಡುವಿನ ಪ್ರೀತಿಯನ್ನು ಸಮರ್ಪಕವಾಗಿ ತೋರಿಸಿದರೆ, ಅನಿರೀಕ್ಷಿತವಾದ ತಿರುವಿನಿಂದಾಗಿ ಚಿತ್ರದ ಎರಡನೇ ಭಾಗ ಅದ್ಭುತವಾಗಿ ಮೂಡಿಬರುತ್ತದೆ.
ಚಿತ್ರವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದಂತೆ ಒಂದೊಮ್ಮೆಗೆ, ಚಿತ್ರದ ಕಥೆ ಸಪ್ಪೆಯೋ ಎಂಬ ಸಂದೇಹ ನನ್ನನ್ನು ಕಾಡತೊಡಗಿತು ಆದರೆ ಕೆಲವೇ ನಿಮಿಷಗಳಲ್ಲಿ ಆ ಸಂದೇಹ ನಿವಾರಣೆಯಾಗಲ್ಪಟ್ಟಿತು.
ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಗೆ ಹಿಂದೊಮ್ಮೆ ಮುತ್ತಿಟ್ಟು (ಕು)ಖ್ಯಾತರಾದ ರಿಚರ್ಡ್ ಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರೊಫೆಸರ್ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
ಅಕೀಟಾ ಎಂಬ ಜಪಾನ್ ತಳಿಯ ನಾಯಿಮರಿಯೊಂದು ರೈಲ್ವೇ ಸ್ಟೇಷನ್ ನಲ್ಲಿ ಅನಿರೀಕ್ಷಿತವಾಗಿ ಪ್ರೊಫೆಸರ್ ಅವರಿಗೆ ಸಿಗುತ್ತದೆ. ಮುದ್ದಾದ ನಾಯಿಮರಿಯ ವಾರಸುದಾರರು ಯಾರೆಂದು ಹುಡುಕುವ ಪ್ರೊಫೆಸರ್ ರವರ ಪ್ರಯತ್ನ ಯಶಸ್ವಿಯಾಗದಿದ್ದಾಗ ನಾಯಿಮರಿಯನ್ನು ಸಾಕುವುದಕ್ಕಾಗಿ ಮುಂದೆಬಂದವರಿಗೆ ದತ್ತು ಕೊಡುವುದು ಎಂದು ಪ್ರೊಫೆಸರ್ ಹಾಗೂ ಅವರ ಪತ್ನಿ ತೀರ್ಮಾನಿಸುತ್ತಾರೆ. ಪ್ರೊಫೆಸರ್ ರವರಿಗಂತೂ ನಾಯಿಮರಿ ಬಹಳಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ, ಆದರೆ ಅವರ ಪತ್ನಿಗೆ ನಾಯಿಮರಿ ಅವರ ಮನೆಯಲ್ಲಿರುವುದು ಎಳ್ಳಷ್ಟೂ ಇಷ್ಟವಿರುವುದಿಲ್ಲ. ನಾಯಿಮರಿ ಮತ್ತು ಪ್ರೊಫೆಸರ್ ರ ಆತ್ಮೀಯತೆಯನ್ನು ಕಂಡು ಪ್ರೊಫೆಸರ್ ನಾಯಿಮರಿಯ ಜತೆಗೆ ಮಕ್ಕಳಂತೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಕಂಡ ಅವರ ಪತ್ನಿ ನಾಯಿಮರಿಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ.
ಮುಂದೆ ನಾಯಿಮರಿ ಬೆಳೆದು ದೊಡ್ಡದಾಗುತ್ತದೆ. ಪ್ರೊಫೆಸರ್ ಜತೆಗೆ ದಿನವೂ ಬೆಳಗ್ಗೆ ಅವರು ಕಾಲೇಜಿಗೆ ತೆರಳುವ ವೇಳೆಯಲ್ಲಿ ರೈಲ್ವೇಸ್ಟೇಷನ್ ತನಕ ಬರುವುದು ಹಾಗೂ ಅವರು ಸಂಜೆ ಮರಳುವ ಹೊತ್ತಿನಲ್ಲಿ ಪುನಃ ಬಂದು ಅವರಿಗಾಗಿ ಕಾದು ಅವರ ಜತೆ ಆಟವಾಡುತ್ತಾ ಮನೆಗೆ ಮರಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಪ್ರೊಫೆಸರ್ ಮಗಳಿಗೆ ಮದುವೆ ನೆರವೇರುತ್ತದೆ ಹಾಚಿಯೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.
ಮುಂದೆ ಚಿತ್ರದಲ್ಲಿನ ಅನೀರೀಕ್ಷಿತ ತಿರುವಿನಿಂದಾಗಿ ಕೊನೆಯವರೆಗೆ ಹಾಚಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.
ನನಗಂತೂ ಎಂದೆಂದೂ ಮರೆಯಲಾಗದ ಚಿತ್ರವಾಗಿ ಹಾಚಿಯ ಕಥೆ ಮನಃಪಟಲದಲ್ಲಿ ನೆಲೆಗೊಂಡಿದೆ.
ನೀವೂ ನೋಡಿ ಏನನ್ನಿಸಿತು ಹೇಳಿ....
Click here to download Hachi a Dog's tale via torrent.
ಈ ಕಥೆಯ ಪೂರ್ವಾರ್ಧ ಹಾಚಿ ಮತ್ತು ಅದರ ಯಜಮಾನನ ನಡುವಿನ ಪ್ರೀತಿಯನ್ನು ಸಮರ್ಪಕವಾಗಿ ತೋರಿಸಿದರೆ, ಅನಿರೀಕ್ಷಿತವಾದ ತಿರುವಿನಿಂದಾಗಿ ಚಿತ್ರದ ಎರಡನೇ ಭಾಗ ಅದ್ಭುತವಾಗಿ ಮೂಡಿಬರುತ್ತದೆ.
ಚಿತ್ರವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದಂತೆ ಒಂದೊಮ್ಮೆಗೆ, ಚಿತ್ರದ ಕಥೆ ಸಪ್ಪೆಯೋ ಎಂಬ ಸಂದೇಹ ನನ್ನನ್ನು ಕಾಡತೊಡಗಿತು ಆದರೆ ಕೆಲವೇ ನಿಮಿಷಗಳಲ್ಲಿ ಆ ಸಂದೇಹ ನಿವಾರಣೆಯಾಗಲ್ಪಟ್ಟಿತು.
ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಗೆ ಹಿಂದೊಮ್ಮೆ ಮುತ್ತಿಟ್ಟು (ಕು)ಖ್ಯಾತರಾದ ರಿಚರ್ಡ್ ಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರೊಫೆಸರ್ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
ಅಕೀಟಾ ಎಂಬ ಜಪಾನ್ ತಳಿಯ ನಾಯಿಮರಿಯೊಂದು ರೈಲ್ವೇ ಸ್ಟೇಷನ್ ನಲ್ಲಿ ಅನಿರೀಕ್ಷಿತವಾಗಿ ಪ್ರೊಫೆಸರ್ ಅವರಿಗೆ ಸಿಗುತ್ತದೆ. ಮುದ್ದಾದ ನಾಯಿಮರಿಯ ವಾರಸುದಾರರು ಯಾರೆಂದು ಹುಡುಕುವ ಪ್ರೊಫೆಸರ್ ರವರ ಪ್ರಯತ್ನ ಯಶಸ್ವಿಯಾಗದಿದ್ದಾಗ ನಾಯಿಮರಿಯನ್ನು ಸಾಕುವುದಕ್ಕಾಗಿ ಮುಂದೆಬಂದವರಿಗೆ ದತ್ತು ಕೊಡುವುದು ಎಂದು ಪ್ರೊಫೆಸರ್ ಹಾಗೂ ಅವರ ಪತ್ನಿ ತೀರ್ಮಾನಿಸುತ್ತಾರೆ. ಪ್ರೊಫೆಸರ್ ರವರಿಗಂತೂ ನಾಯಿಮರಿ ಬಹಳಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ, ಆದರೆ ಅವರ ಪತ್ನಿಗೆ ನಾಯಿಮರಿ ಅವರ ಮನೆಯಲ್ಲಿರುವುದು ಎಳ್ಳಷ್ಟೂ ಇಷ್ಟವಿರುವುದಿಲ್ಲ. ನಾಯಿಮರಿ ಮತ್ತು ಪ್ರೊಫೆಸರ್ ರ ಆತ್ಮೀಯತೆಯನ್ನು ಕಂಡು ಪ್ರೊಫೆಸರ್ ನಾಯಿಮರಿಯ ಜತೆಗೆ ಮಕ್ಕಳಂತೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಕಂಡ ಅವರ ಪತ್ನಿ ನಾಯಿಮರಿಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ.
ಮುಂದೆ ನಾಯಿಮರಿ ಬೆಳೆದು ದೊಡ್ಡದಾಗುತ್ತದೆ. ಪ್ರೊಫೆಸರ್ ಜತೆಗೆ ದಿನವೂ ಬೆಳಗ್ಗೆ ಅವರು ಕಾಲೇಜಿಗೆ ತೆರಳುವ ವೇಳೆಯಲ್ಲಿ ರೈಲ್ವೇಸ್ಟೇಷನ್ ತನಕ ಬರುವುದು ಹಾಗೂ ಅವರು ಸಂಜೆ ಮರಳುವ ಹೊತ್ತಿನಲ್ಲಿ ಪುನಃ ಬಂದು ಅವರಿಗಾಗಿ ಕಾದು ಅವರ ಜತೆ ಆಟವಾಡುತ್ತಾ ಮನೆಗೆ ಮರಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಪ್ರೊಫೆಸರ್ ಮಗಳಿಗೆ ಮದುವೆ ನೆರವೇರುತ್ತದೆ ಹಾಚಿಯೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.
ಮುಂದೆ ಚಿತ್ರದಲ್ಲಿನ ಅನೀರೀಕ್ಷಿತ ತಿರುವಿನಿಂದಾಗಿ ಕೊನೆಯವರೆಗೆ ಹಾಚಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.
ನನಗಂತೂ ಎಂದೆಂದೂ ಮರೆಯಲಾಗದ ಚಿತ್ರವಾಗಿ ಹಾಚಿಯ ಕಥೆ ಮನಃಪಟಲದಲ್ಲಿ ನೆಲೆಗೊಂಡಿದೆ.
ನೀವೂ ನೋಡಿ ಏನನ್ನಿಸಿತು ಹೇಳಿ....
Click here to download Hachi a Dog's tale via torrent.
Wednesday, February 27, 2013
ಅಲ್ಲಾಹ್ ಕೊಟ್ಟ ಅನಾನಾಸು
ರಾತ್ರಿ ಹತ್ತು ಘಂಟೆಗೆ ಎರಡನೇ ಪಾಳಿಯ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸಾಗುತ್ತಿದ್ದೆ.
ದೊಡ್ಡನೆಯ ಜಲ್ಲಿಕಲ್ಲುಗಳನ್ನು ಅರ್ಧ ತನ್ನ ಒಡಲೊಳಗೆ ಹಾಗೂ ಅರ್ಧ ಹೊರಗೆ ಚಾಚಿಕೊಂಡು, ಡಾಮರಿನ ಲೇಪಕ್ಕೋಸ್ಕರ ಕಕ್ಕುಲತೆಯಿಂದ ಕಾಯುತ್ತಾ ಬಿದ್ದುಕೊಂಡಿದ್ದ ಶಾಂತಿಪುರದ ನಿರ್ಜನವಾದ ರಸ್ತೆಯಲ್ಲಿ ನನ್ನ ಬೈಕ್ ಚಲಾಯಿಸುತ್ತಾ ಬರುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಒಂದು ಅನಾನಾಸು ಹಣ್ಣು ಚಲಿಸದೇ ! ಬಿದ್ದುಕೊಂಡಿತ್ತು.
ಅರರೇ ಇದೇನಚ್ಚರಿಯೆಂದು ಮೆಲ್ಲನೆ ಬೈಕ್ ನಿಲ್ಲಿಸಿ ಹಣ್ಣನ್ನು ಎತ್ತಿ ಚೆನ್ನಾಗಿದೆಯೇ ಎಂದು ಪರೀಕ್ಷಿಸಿದೆ, ಹೆ ಹೆ.... ಹಣ್ಣು ಭಾರೀ ಒಳ್ಳೆದುಂಟು ಮಾರಾಯ್ರೆ... ಬಹಳ ದಿನಗಳಿಂದ ಅನಾನಾಸು ತಿನಬೇಕು ಎಂದಿದ್ದ ಬಯಕೆ ದೂರಾಯ್ತು ಇಂದು ಎಂದು ಮನದಲ್ಲೇ ನೆನೆದೆ. ಆದರೇನು ಮಾಡುವುದು ,ದುಷ್ಟಮನಸ್ಸು, ಯಾಕೆ ಬಿದ್ದದ್ದು ಯಾವಾಗ ಬಿದ್ದದ್ದು ಯಾರದ್ದು ಬಿದ್ದದ್ದು ? ಬಿದ್ದರೆ ಹೆಕ್ಕಿಕೊಂಡು ಹೋಗದ್ದೇಕೆ ?, ಯಾರದ್ದಾದರೂ ತಂತ್ರವೇ ? ಮಂತ್ರವೇ ಎಂದೆಲ್ಲಾ ಅರೆಕ್ಷಣದಲ್ಲಿ ಕೇಳಿತು.
ಅಷ್ಟರಲ್ಲೇ ಅನಾನಾಸು ಹಣ್ಣು ಬೀಳಿಸಿದ್ದವನ ಮೇಲೆ ಮನಸ್ಸಿನಲ್ಲಿ ಒಂದು ರೀತಿಯ ಕರುಣಾರಸ ಪ್ರವಹಿಸಿತು, ಅಯ್ಯೋ ಪಾಪ ಇಷ್ಟು ದೊಡ್ಡ ಅನಾನಾಸು ಹಣ್ಣಾದರೂ ಆತನ ಕಣ್ತಪ್ಪಿಸಿ ಬಿತ್ತಲ್ಲವೇ, ಚೀಲದಿಂದ ಬಿದ್ದದ್ದಾಗಿರಲಿಕ್ಕಿಲ್ಲ ಮತ್ತೆ ಹೇಗೆ ಬಿತ್ತು ಎಂದು ಯೋಚಿಸುತ್ತಾ ಮುಂದೆ ಹಿಂದೆ ನೋಡಿದೆ. ಓssss ದೂರದಲ್ಲಿ, ಅಷ್ಟೇನು ದೂರವಲ್ಲss ಹತ್ತಿರದಲ್ಲೇ ಒಂದು ಜನ ! ಗಾಡಿಯೊಂದನ್ನು ತಳ್ಳುತ್ತಾ ಹೋಗುತ್ತಿದೆ. ಕ್ಷಮಿಸಿ... ವ್ಯಕ್ತಿಯೊಬ್ಬ ಹೋಗುತ್ತಿದ್ದಾನೆ. ಹ್ಮ್sss ಇನ್ನೇನು ಮಾಡುವುದು,
ಆತನೇ ನನ್ನೊಡೆಯ ಎಂದು ಆನಾನಾಸು ಹೇಳಿ ನಕ್ಕಂತೆ ಕಂಡಿತು(ಕತ್ತಲೆಯಲ್ಲೂ). ಮೆಲ್ಲನೆ ಆತನ ಬಳಿಗೆ ಬಂದು ಆತನ ಗಾಡಿಯನ್ನು ಪರೀಕ್ಷಿಸಿದೆ, ಎಡಗಡೆ ಮೂಲೆಯಲ್ಲಿ ಮತ್ತೆ ನಾಲ್ಕಾರು ಅನಾನಾಸು ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡು ಮಲಗಿದ್ದವು. ಕೈಯಲ್ಲಿದ್ದ ಅನಾನಾಸನ್ನು ಎತ್ತಿ ಏನಿದು ಬೀಳಿಸಿಕೊಂಡು ಹೋಗುತ್ತಿರುವೆಯಲ್ಲಾ ತಗೋ ಎಂದು ಕೊಟ್ಟೆ,
೫೦ ವರ್ಷ ಮೇಲ್ಪಟ್ಟ ಮುಸ್ಲಿಂ ವ್ಯಕ್ತಿ ಆತ, ಬಿಳಿಯ ಗಡ್ಡವನ್ನು ಕತ್ತರಿಸಿ ಮಟ್ಟಸವಾಗಿಟ್ಟಿದ್ದ ಮತ್ತು ಬಿಳಿ ಟೊಪ್ಪಿ ತೊಟ್ಟಿದ್ದ. ಕತ್ತಲೆಯಲ್ಲಿ ಕಣ್ಣು ಕಾಣಿಸಲಿಲ್ಲ ಸ್ವಾಮೀ ಹಾಗೆ ಹಣ್ಣು ಬಿದ್ದುದು ತಿಳಿಯಲಿಲ್ಲ ಎಂದ. ಅನಾನಾಸನ್ನು ಕೈಯಲ್ಲೇ ಹಿಡಿದುಕೊಂಡಿದ್ದ. ಎಷ್ಟು ಕಿಲೋ ಗೆ ಎಂದು ಕೇಳಿದೆ. ೩೦ ಎಂದ, ಮಾರ್ಕೇಟ್ನಲ್ಲಿ ? ೨೦-೨೫ ರೂಪಾಯಿಗೆ ಸಿಗುತ್ತದೆ ಸ್ವಾಮಿ ಎಂದ, ಸರಿ ಹೊರಡುತ್ತೇನೆ ಎಂದು ಹೊರಡಲನುವಾದಾಗ ಆತನಿಗೆ ಏನನ್ನಿಸಿತೋ ಗೊತ್ತಿಲ್ಲ, ತಗೊಳ್ಳಿ ಸ್ವಾಮೀ ತೆಗೆದುಕೊಂಡು ಹೋಗಿ ಎಂದು ಅನಾನಾಸನ್ನು ನನ್ನ ಮುಂದೆ ಹಿಡಿದ ! ....
ಅಯ್ಯೋ ಬೇಡಯ್ಯಾ ನಾನು ಹೀಗೆಯೆ ಬೆಲೆ ವಿಚಾರಿಸಿದ್ದು, ಬೇಡ ಎಂದೆ... ಪರವಾಗಿಲ್ಲ ತೆಗೆದುಕೊಳ್ಳಿ ಎಂದು ಅನಾನಾಸನ್ನು ಮತ್ತಷ್ಟು ಮುಂದೆ ಹಿಡಿದ ಹಣ್ಣಾದ ಅನಾನಾಸಿನ ಸುವಾಸನೆ ನನ್ನ ಮೂಗಿಗೆ ಬಡಿದು ಮನಸ್ಸಿನಲ್ಲಿ ಮತ್ತೆ ಆಸೆ ಚಿಗುರೊಡೆಯಿತು... ೧-೧.೫ ಕಿಲೋ ದಷ್ಟು ತೂಕವಿರಬಹುದು, ಆತನಿಗೆ ಹಣ ಕೊಟ್ಟು ಖರೀದಿಸೋಣವೆಂದರೆ ನನ್ನ ಬಳಿ ಆ ಸಮಯದಲ್ಲಿ ೧೦ರೂ ನೋಟು ಹಾಗೂ ೧ ರೂ ನಾಣ್ಯದ ಹೊರತಾಗಿ ಬೇರೆ ಹಣವಿರಲಿಲ್ಲ. ಒಂದು ರೂ ನಾಣ್ಯವನ್ನು ನಾನು ಆತನಿಗೆ ಕೊಡುವಂತಿಲ್ಲ ಯಾಕೆಂದರೆ ನಮ್ಮಲ್ಲಿ ಹಣದ ಚೀಲವನ್ನು ಪೂರ್ತಿಯಾಗಿ ಖಾಲಿಯಾಗಿಸಬಾರದೆಂಬ ಅಲಿಖಿತ ನಿಯಮವಿದೆ!! ನೋಡಯ್ಯಾ ನನ್ನ ಬಳಿ ಕೇವಲ ೧೦ರೂಪಾಯಿಯ ನೋಟು ಮಾತ್ರವಿರುವುದು ಆದ್ದರಿಂದ ಬೇಡ ನಾನು ತೆಗೆದುಕೊಳ್ಳಲಾರೆ ಎಂದೆ.
ಪರವಾಗಿಲ್ಲ ೧೦ರೂ ಕೊಡಿ, ನಿಮ್ಮದು ಒಳ್ಳೆಯ ಮನಸ್ಸು ಆದ್ದರಿಂದ ಬಿದ್ದ ಹಣ್ಣನ್ನು ಎತ್ತಿ ಕೊಡುತ್ತಿದ್ದೀರಿ, ಬೇರೆಯವರಾಗಿದ್ದಲ್ಲಿ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದರು, ನನಗೆ ಈ ಹತ್ತು ರೂ ಮತ್ತು ನಿಮಗೆ ಅನಾನಾಸು ಆ ಅಲ್ಲಾಹ್ ಕೊಡುತ್ತಿರುವುದು ಆದ್ದರಿಂದ ತೆಗೆದುಕೊಳ್ಳಿ ಎಂದ.
ಒಹ್ ಅಲ್ಲಾಹ್ ಕೊಟ್ಟ ಅನಾನಾಸು ಬೇಡವೆಂದು ಹೇಗೆ ಹೇಳಲಿ, ಸರಿ ದೇವನೊಬ್ಬನೇ ನಾಮ ಹಲವು ಎಂದು ಹತ್ತು ರೂಗಳನ್ನು ಆತನ ಕೈಗಿತ್ತು ಅನಾನಾಸನ್ನು ನನ್ನ ಹೆಗಲುಚೀಲಕ್ಕೆ ತುಂಬಿಸಿ ಬೈಕ್ ಚಾಲೂ ಮಾಡಿ ಹೊರಟೆ......
ಬಹಳ ದೂರ ಬಂದರೂ ಮನಸ್ಸಿನಲ್ಲಿ ಹಣ್ಣಿನ ವ್ಯಾಪಾರಿ ಮುದುಕನ ಚಿತ್ರವೇ ತುಂಬಿತ್ತು....
ಕಟ್ಟಿಗೆ ಕಡಿಯುವವನ ಕೊಡಲಿ ನೀರಿಗೆ ಬಿದ್ದ ಕಥೆ ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದು ಹೋಗುತ್ತಲೇ ಇತ್ತು......
Thursday, November 15, 2012
ಪರಮಾತ್ಮ
My poem was published in Suddi Bidugade on 12th Nov 2012
ಪರಮಾತ್ಮ
ಹರಿವ ನೀರಿಗೆ ನಿರಂತರ ಸೆಳೆತವಾಗಿ
ಬಾಂದಳದಲಿ ಬೆಳಗುವ ರವಿಗೆ ಶಕ್ತಿಯಾಗಿ
ಸದಾ ಪರಿಭ್ರಮಣಕೆ ಭೂಮಿಯ ಕಕ್ಷೆಯಾಗಿ
ಅರಳಿದ ಹೂವಿನ ಎಸಳಿನ ಕೆಂಪು ನೀನಾಗಿ
ಕುಲಕೋಟಿಯಭ್ಯುದಯದ ಪ್ರೀತಿಯಾಗಿ
ಬೀಸುವ ಗಾಳಿಯಲಿ ಬೆರೆತ ಉಸಿರಾಗಿ
ಹಾಡುವ ಹಕ್ಕಿಗೊರಳಿನ ನಾದವಾಗಿ
ಕಂಪಾಗಿ, ತಂಪಾಗಿ, ಸೊಂಪಾಗಿ, ಇಂಪಾಗಿ
ಕೋಟಿಸಂಖ್ಯೆಯ ದಾನವರ ನಡುವೆ ಓರ್ವ ಸಂತನಾಗಿ
ಶೂನ್ಯದೊಳಗಿನನಂತ ಬ್ರಹ್ಮಾಂಡವಾಗಿ
ಅನಂತ ದಿಗಂತದಾಚೆಗಿನ ಶೂನ್ಯ ನೀನಾಗಿ
ನಿನ್ನೆ ನಾಳೆಗಳ ನಡುವಿನ ಇಂದು ನೀನಾಗಿ
ನಿರಂತರ ನಿರೀಕ್ಷೆಗಳ ಅಂತ್ಯ ನೀನಾಗಿ
ಪಿತನಾಗಿ ಸುತನಾಗಿ ಸತಿಯಾಗಿ ಪತಿಯಾಗಿ
ಮಾತೆ ಮಮತೆಯ ನಿರ್ಮಲ ಜಲಧಿಯಾಗಿ
ಅಂತರಾತ್ಮದೊಳಗಿನ ಏಕಾಂತ ಸತ್ಯವಾಗಿ
ಜ್ಞಾನ ವಿಜ್ಞಾನಗಳ ಸಂಯುಕ್ತವಾಗಿ
ಸತ್ಯಪಥವಾಗಿ ಶಿಷ್ಟರಕ್ಷಕನಾಗಿ
ಬಿಂದುವಲಿ, ಸಿಂಧುವಲಿ, ಜೀವದಲಿ, ಆತ್ಮದಲಿ
ಬೆರೆತ ಅಮೂರ್ತ ಮೂರ್ತಿಯೇ. . .
ನಿನಗೆ ಕೋಟಿ ನಮಸ್ಕಾರ...
http://news.suddimahithi.com/puttur/news.asp?s_dateentry=12%2F11%2F2012&econtentPage=4
Thursday, November 8, 2012
ಹಣ ಸುಡುವ ಹಬ್ಬ...
ಸುಡಬೇಡ ಹಣವನೀ, ಕಡಿವತೆರ ಕೊಡಲಿಯಲಿ
ಕುಳಿತ ಕೊಂಬೆಯ ಮೂಢ ಅಡವಿಯೊಳಗೆ...
ಸತ್ಕಾರ್ಯಗಳ ನಡೆಸಿ , ದಾನಾದಿಗಳನಿತ್ತು
ಸಂತಸವ ಕಾಣುತಿರು ದೀನರೊಳಗೆ... ---- ಲ.ನಾ.ಭಟ್ಟ
ಕುಳಿತ ಕೊಂಬೆಯ ಮೂಢ ಅಡವಿಯೊಳಗೆ...
ಸತ್ಕಾರ್ಯಗಳ ನಡೆಸಿ , ದಾನಾದಿಗಳನಿತ್ತು
ಸಂತಸವ ಕಾಣುತಿರು ದೀನರೊಳಗೆ... ---- ಲ.ನಾ.ಭಟ್ಟ
Tuesday, October 23, 2012
ಉಸಿರು...
ಕಾವ್ಯವಾಗದೇ ಕಣವು ಕವಿಯು ಜೀವದ ಲೇಪವಿಡಲು
ನೃತ್ಯವಾಗುವುದು ಹೆಜ್ಜೆ ತಾಳ ಮೇಳಗಳ ಪ್ರೀತಿಯಲಿ ವರಿಸಿರಲು
ಕಲೆಯಾಗದೇ ಬರಿಯ ಕಲೆ-ಕಲೆ-ಯೆಂಬ ಬಣ್ಣಗಳು
ಕಥೆಯಾಗದೆ ಸದಾ ಸಾಧನೆಯ ಪರಿಮಳವ ಸೆಳೆವುಸಿರು
ನೃತ್ಯವಾಗುವುದು ಹೆಜ್ಜೆ ತಾಳ ಮೇಳಗಳ ಪ್ರೀತಿಯಲಿ ವರಿಸಿರಲು
ಕಲೆಯಾಗದೇ ಬರಿಯ ಕಲೆ-ಕಲೆ-ಯೆಂಬ ಬಣ್ಣಗಳು
ಕಥೆಯಾಗದೆ ಸದಾ ಸಾಧನೆಯ ಪರಿಮಳವ ಸೆಳೆವುಸಿರು
Thursday, September 20, 2012
ಮಣ್ಣಬೊಂಬೆ
ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ
ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ
ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು
ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು
ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...
Subscribe to:
Posts (Atom)





