Saturday, November 28, 2015

ಅಸಹನೆ


ಜಳ್ಳು - ಪೊಳ್ಳಿನ ನಡುವೆ ಸತ್ಯವನು ಅರಸುವುದು ಕಲಿಯುಗದ ಕರ್ಮ.

ಯಾವುದೋ ಒಂದು ಘಟನೆಗೆ ಅಥವಾ ವಿಷಯಕ್ಕೆ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದುಕೊಂಡಿದ್ದರೂ , ಸಮಯ - ಸಂದರ್ಭ, ವಿವೇಕ, ಮುಜುಗರ ಇಂತಹವುಗಳಿಗೆ ಸಿಲುಕಿ ಆ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಮೂಕರಾಗಿದ್ದುಬಿಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಆ ವಿಷಯ ಅಸಹನೆಯಾಗಿ ಮಾರ್ಪಡುತ್ತದೆ ಅದು ಇನ್ನೆಲ್ಲೋ ಯಾರಮೇಲೋ ಪ್ರಕಟವಾಗಿ ಆಗಬಾರದ ನಕಾರಾತ್ಮಕ ಪರಿಣಾಮವೇ ಉಂಟಾಗುತ್ತದೆ. ಯಾವಾಗ ಎಲ್ಲಿ ಹೇಳಬೇಕಾದ್ದನ್ನು ಸರಿಯಾಗಿ ಹೇಳಿಯೇ ತೀರುತ್ತಾನೋ ಆತ ಹಿಂದೆ ಯಶಸ್ಸು ತಾನಾಗಿಯೇ ಹರಿದು ಬರುತ್ತದೆ, ಆತ ವಿವೇಕಿಯೆನ್ನಿಸಿಕೊಳ್ಳುತ್ತಾನೆ, ಇತರರಿಂದ ಮಾನಿಸಲ್ಪಡುತ್ತಾನೆ. ಆದ್ದರಿಂದ ಹೇಳಬೇಕಾದ ವಿಷಯವನ್ನು ನಯವಾಗಿ ಇತರರು ಒಪ್ಪುವಂತೆ ಯಾರಿಗೂ ನೋವಾಗದಂತೆ ತಿಳಿಸುವ ಕಲೆಯನ್ನು ಬಲ್ಲವನೇ ಶ್ರೇಷ್ಠನೆನ್ನಿಸುತ್ತಾನೆ.


No comments:

ನಿಮ್ಮ ಅಭಿಪ್ರಾಯ