Sunday, July 12, 2015

ದೃಷ್ಟಿ

ಒಂದು ಮರವಿದ್ದಲ್ಲಿ, ಒಬ್ಬ ಅದರ ತೊಗಟೆಯನ್ನು ಮುಟ್ಟಿ ಇದು ಬಹಳ ಕಠಿಣವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಎಲೆಯನ್ನು ನೋಡಿ ಹೂವನ್ನು ನೋಡಿ, ಆಹಾ ಸುಂದರವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಹಣ್ಣು ತಿಂದು ಕಹಿಯೋ/ಸಿಹಿಯೋ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸ್ತಾನೆ. ಮತ್ತೊಬ್ಬ ಅದರ ಗೆಲ್ಲಿನ ತುಂಡನ್ನು ಸೌದೆ ಮಾಡಿ, ಓ ಒಳ್ಳೆಯ ಉರುವಲು ಅಥವಾ ಪ್ರಯೋಜನಕ್ಕಿಲ್ಲದ ಮರ ಎನ್ನಬಹುದು. ಅವರವರಿಗೆ ಬೇಕಾದ ಅಂಶವನ್ನು ಅಥವಾ ಗುಣವನ್ನು ಮಾತ್ರ ಗಮಸಿರುತ್ತಾರೆ. ಆದರೆ ಎಲ್ಲಾ ಲಕ್ಷಣಗಳನ್ನು ಯಾರು ಸಂಪೂರ್ಣವಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಮಾತ್ರ ಸರಿಯಾಗಿರ್ತದೆ. ನಮ್ಮ ಜೀವನವೂ ಹೀಗೇ ಅಲ್ವೇ ?
 ------------------------------------------------
ಓರ್ವ ವ್ಯಕ್ತಿಯನ್ನು ಹೊಗಳುವುದಕ್ಕೆ ಮೊದಲು ಹೆಚ್ಚು ಯೋಚಿಸಬೇಕೆಂದಿಲ್ಲ, ಆದರೆ ಯಾರನ್ನಾದರೂ ದೂಷಿಸಬೇಕೆಂದಿದ್ದರೆ ಸಾವಿರ ಬಾರಿ ಯೋಚಿಸು, ಆ ವ್ಯಕ್ತಿಯಲ್ಲಿ ಹೊಗಳುವಂತಹಾ ಒಂದೂ ಗುಣವಿಲ್ಲದಿದ್ದಲ್ಲಿ ಆ ಮೇಲೆ ದೂಷಿಸು.... 

No comments:

ನಿಮ್ಮ ಅಭಿಪ್ರಾಯ